ಅಂತರಂಗದ
ಎದೆಯೊಳಗೆ
ನಿಗಿ ನಿಗಿ ಬೆಂಕ್ಕಿ ಜ್ವಾಲೆ
ಆರುತ್ತಲೆ ಇಲ್ಲ
ಅದು ಇನ್ನು ಇನ್ನು
ಜ್ವಲಿಸುತಲೇ ಇದೆ
ಅಂದು ಸರಿ ಯೆನಿಸಿದ್ದು
ಇಂದು ಯಾಕೋ ತಪ್ಪೆನಿಸುತ್ತಿದೆ .
ಖರೆ ಹೇಳುತ್ತೇನೆ ,
ನಾನು ತಿಳಿದು ಮಾಡಿದ ತಪ್ಪಲ್ಲ
ಅಂದಿನ ಕಾಲ ದಿನ ಮಾನ ಗಳೇ ಹಾಗೆ
ಅಂದು ಸರಿ ...ಇಂದು ತಪ್ಪು ...ಮುಂದೆ .....?
ಆಶ್ಚರ್ಯವೆಂದರೆ
ಎದೆಯೊಳಗಿನ
ಬೆಂಕಿ ಜ್ವಾಲೆ ಇನ್ನು ನಿಗಿ ನಿಗಿ
.ಅಂದು ನೆಟ್ಟ ಬೀಜಗಳೆಲ್ಲಾ
ಮೊಳಕೆ ಹೊಡೆದು ...... ಮರಗಳಾಗಿ
.ಇಂದು ನೆರಳ ನಿಡುತ್ತಿ ವೆ
ಒಮೊಮ್ಮೆ ಸುಮ್ಮನೆ ನಡೆದು
ಹೋಗುತ್ತೇನೆ
ಅವುಗಳ ಬಳಿಗೆ .
,ಅವು ನನ್ನ ನೋಡಿ
ಹೆಮ್ಮೆಯಿಂದ ನಕ್ಕಂತೆ ಅನಿಸುತ್ತದೆ .
ಜಾ ಗತೀ ಕರಣ,ಉದಾರೀ ಕರಣ ,ದ .
ಸುನಾಮಿಗೆ ಸಿಕ್ಕ ನನ್ನೂರು ...
ಭೂಪಟದಿಂದಲೇ
ಕಾಣೆಯಾಗ ಬಹುದೆಂದು
ಆತಂಕದಿಂದ ಅವುಗಳೆಡೆಗೆ ನಡೆದೇ ...
.ಯಾಕೋ ಅವುಗಳ ಕಂಣಿದ ಕಣ್ಣೀರು
ನಿಲ್ಲುವ ಸೂಚನೆ ಇಲ್ಲ .
ಯಾಕೋ ನನ್ನೆದೆಯೊಳಗಿನ
ಬೆಂಕಿಯಜ್ವಾಲೆ ಸುನಾಮಿಯಂತೆ
ಎತ್ಹರ ಎತ್ಹರಕ್ಕೆ ಬೆಳೆದು ,
ಜಾ ಗತೀ ಕರಣ ,ಉದಾರೀ ಕರಣವನ್ನ
ಆಪೋಶನ ತೆಗೆದು ಕೊಳ್ಳುವುದನ್ನ ಕಂಡು
.ವಸಂತ ಮೆಲ್ಲ --ಮೆಲ್ಲನೆ ನಡೆದು ಬಂದ ,
No comments:
Post a Comment