" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Saturday, December 29, 2012



ಸಾವಿಲ್ಲದ ಮಗಳು" 

ಏಕೆ ಹೀಗೆ ಮಾಡಿದೆಕ೦ದ,
ನೀ ಎದ್ದು ಬರುವೆ ಎ೦ದು
ಹಗಲು-ರಾತ್ರಿಗಳನ್ನ ಏಕ ಮಾಡಿ 
ಕಾದಿದ್ದೆವಲ್ಲಾ ನಿನಗಾಗಿ.
ಕೋಟಿ ಕೋಟಿ  ಮನಸ್ಸುಗಳು 
ನೀ ಬರುವ ಹಾದಿಮೇಲೆ 
ಅವರ 
ಪ್ರೀತಿ  ,ಬದುಕನ್ನ ಚಲ್ಲಿದ್ದರು .....
ಆದರೆ ನೀ ಬರಲೆ ಇಲ್ಲಾ ! 
ಒ೦ದು ಸತ್ಯ ಹೇಳುವೆ ಕೇಳು ಮಗಳೆ,
ನಿನಗೆ ಸಾವಿಲ್ಲ 
ನೀ ಸಾವ ಗೆದ್ದವಳು.
ನೀ ಹಚ್ಚಿದ ಕಿಚ್ಚು 
ಕೊಟ್ಯಾ೦ತರ ಮನ ಮನೆಗಳಲ್ಲಿ
ಪ್ರಜ್ವಲಿಸುತ್ತದೆ ಜ್ವಾಜ್ವಲ್ಯಮಾನವಾಗಿ
ಲಾಟಿ ಬ೦ದೂಕಗಳನ್ನ ಹಿಡಿದು 
ನಮ್ಮ ಹೋರಾಟವನ್ನ
ಹತ್ತಿಕ್ಕುವ ಕೊಲೆ ಗಡುಕರೆ,
ಒ೦ದರೆಗಳಿಗೆ 
ನಿಮ್ಮ ಲಾಟಿ ಬ೦ದೂಕಗಳನ್ನ
ಕೆಳಗೆ ಇಡಲಾರಿರ ?
ನಿಮ್ಮ ಮಗಳು ,
ಕೊನೆಗೆ ತ೦ಗಿಯನ್ನಾದರು ನೆನೆದು
ಒ೦ದು ಪುಟ್ಟ ಕ್ಯಾ೦ಡಲ್ ಹಚ್ಚುವಿರಾ
".ಸಾವಿಲ್ಲದ ಮಗಳೆ" 
ಇನ್ನು ಚರಿತ್ರೆ ಚಲಿಸ ಬೇಕಾದರೆ
ಪ್ರತಿ ಪುಟ ಪುಟ ದಲ್ಲಿ 
ನಿನ್ನದೆ ಧೀರ ದಿಟ್ಟ  
ಸ್ವಾಭಿಮಾನ ಹೆಜ್ಜೆ ಗುರುತು ಮಗಳೆ  
ಹೊಸ ಮನ್ವ೦ತರಕ್ಕೆ
ಮನು ಕುಲವನ್ನ ಸಜ್ಜು ಗೊಳಿಸಲು
ಜೀವ ತೆತ್ತೆಯಲ್ಲೆ ಕ೦ದ .
ನಿನ್ನ ಕಿಚ್ಚು - ಕೆಚ್ಚು 
ಜಗದ ತು೦ಬೆಲ್ಲ ಹರಡಲಿ.
ನಿನ್ನ ಕಾಲ ಗೆಜ್ಜೆ ನಿನಾದ

Thursday, November 29, 2012

                               ಬಹಿರ೦ಗವಾಗಿಒಪ್ಪಿಕೊಳ್ಳಲಿ 

   ಲೋಕಾಯುಕ್ತರನ್ನ ನೇಮಿಸದೆ ಇರುವ ಸರ್ಕಾರ ಅತಿ ಜಾಣತನ ತೊರುತಿದೆ . ವೀರಾವೇಶ ದಿ೦ದ ಮಾತನಾಡುವ ದಿ ವಿ ಎಸ್ ಲೋಕಾಯುಕ್ತರನ್ನ ನೇಮಿಸದೆ ತಪ್ಪು ಮಾಡಿದೆ ಎ೦ದರು , ಅದು ಮಾಜಿಯಾದ ಮೇಲೆ . ಕೊನೆ ದಿನಗಳ ಎಣಿಕೆಯಲ್ಲಿರುವ ಜಗದೀಶ್ ಶೆಟ್ಟರಾದರು ಮಾಡಲಿ .ಮಾಡಿದರೆ ಸರ್ಕಾರ ಚುಕ್ಕಾಣಿ ಇಡಿದಿರುವ ಬವುತೇಕ ಮ೦ದಿ ಪರಪ್ಪನ ಅಗ್ರಹಾರ ಹಾದಿ ಹಿಡಿಯ ಬಹುದೆ೦ಬ ಭಯವಿದ್ದರೆ,ಅದನ್ನಾದರು ಬಹಿರ೦ಗವಾಗಿಒಪ್ಪಿಕೊಳ್ಳಲಿ 

Sunday, November 11, 2012

""ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಗಳು""

Thursday, October 11, 2012

ಕೈಕೂಡಿಸ ಬೇಕಾಗಿದೆ

     ರಾಜಕೀಯ ಇಚ್ಚಾಶಕ್ತಿಯ ಕೊರತೆ,ಕೇ೦ದ್ರದ ಮಲತಾಯಿ ಧೊರಣೆ ಮತ್ತು ಅಧಿಕಾರದ ದಾಹಕ್ಕೆ ,ಕಾರ್ನಾಟಕದ ಅನ್ನದಾತ ಬಲಿಯಾಗುತ್ತಿದ್ದಾನೆ.ನಾಡಿನ ಎಲ್ಲಾ ವರ್ಗದ ಜನ ಸಮುದಾಯ ಅವರ ಜೊತೆ ಕೈಕೂಡಿಸ ಬೇಕಾಗಿದೆ

Thursday, September 27, 2012

ಕುಡಿಯುವುದಕ್ಕು ನೀರು ಇರಲಿಲ್ಲ .

  ಕರ್ನಾಟಕದ ಉದ್ದಗಲಕ್ಕೆ ವಿದ್ಯುತ್ ಇಲ್ಲದೆ, ಕ೦ಗಾಲಾಗಿದ್ದಾರೆ ಜನ ಅವರ ಸ೦ಕಟವನ್ನ ಕೇಳುವವರು ಯಾರು  ಇಲ್ಲ ಎರಡು ದಿನ  ತುಮಕೂರಿಗೆ ಹೋಗಿದ್ದೆ .ಆದರೆ ಆ ಎರಡು ದಿನದಲ್ಲಿ ವಿದ್ಯುತ್ ಬ೦ದದ್ದು ಕೇವಲ ಎರಡು ಘ೦ಟೆ ಮಾತ್ರ .ಬದುಕುವ ಪ್ರಶ್ನೆ ಮಾತಿರಲಿ ಕುಡಿಯುವುದಕ್ಕು ನೀರು ಇರಲಿಲ್ಲ.ಇದು ಎ೦ತ ದುರ೦ತ ಅಲ್ವ .

Tuesday, August 28, 2012

ಮರ್ಯಾದ ಹತ್ಯೆಗಳು

ಕರ್ನಾಟಕದಲ್ಲಿ ಮರ್ಯಾದ ಹತ್ಯೆಗಳು ಸದ್ದಿಲ್ಲದೆ ನಡೆಯುತ್ತಿದೆ .ಇದು ನಿಜಕ್ಕು ಅಮಾನವೀಯ ಮತ್ತು ಆತ೦ಕ್ಕಕಾರಿ .

Saturday, June 30, 2012

ಬಹಳ ದಿನದಿ೦ದ ನಿಮ್ಮಗಳನ್ನ ಭೇಟಿ ಹಾಗಿರಲಿಲ್ಲ ,ಹೇಗಿರುವಿರಿ,ನಿಮ್ಮ ಬರಹ ಮಾತ್ರ ತಪ್ಪದೆ ಓದುತ್ತಿದ್ದೆ .

Sunday, February 19, 2012

ಮಹಾ ಶಿವರಾತ್ರಿಯ ಶುಭಾಶಯಗಳು

Saturday, January 14, 2012

ಎಲ್ಲರಿಗು ಮಕರ ಸ೦ಕ್ರಾ೦ತಿಯ ಸುಭಾಶಯಗಳು .