" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Sunday, December 25, 2011


 ಅಕ್ಷರ ನಮನ .

   ಪತ್ತೇದಾರಿ ಕಾದಂಬರಿಯ ಸಾಮ್ರಾಟ ನರಸಿ೦ಹಯ್ಯ ನಿಧನ ಹೊ೦ದಿದ್ದಾರೆ .ನಾನು ಪತ್ರಿಕೋದ್ಯಮದ ವಿಧ್ಯಾರ್ಥಿಯಾಗಿದ್ದಾಗ ಒ೦ದೇರಡು ಭಾರಿ ವೈಯುಕ್ತಿಕವಾಗಿ ಭೇಟಿ ಮಾಡಿದ್ದೆ ಪತ್ತೆದಾರಿ ಕಾದ೦ಬರಿ ಮೂಲಕ ಕನ್ನಡ ಅಕ್ಷರ  ಲೋಕವನ್ನ ಶ್ರೀಮ೦ತ ಗೊಳಿಸಿದ ಅವರಿಗೆ ಈ ಅಕ್ಷರ   ನಮನ .

Saturday, December 24, 2011

 ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಷಯಗಳು  

ಮಾವುತ್ಸೆತು೦ಗ ಮತ್ತು ಕ೦ಭಾರರು

ವಿಧಾನಸೌಧದ
ಸುತ್ತ 
ಗಿರಿಕಿ ಹೊಡೆಯುತ್ತಿದ್ದ 
ಮಾವುತ್ಸೆತು೦ಗನನ್ನ 
ಕ೦ಡ ಕ೦ಭಾರರು ,
ಏಕೆ ? 
ಬ೦ದೆ ನಿನಿಲ್ಲಿಗೆ
ಅದು ಅಧಿಕಾರ ಸೌಧಕ್ಕೆ .
ನೋಡು 
ಸಾಲು ಸಾಲು ಮ೦ದಿ 
ಹೊರಟ್ಟಿದ್ದಾರೆ
ಪರಪ್ಪನ ಅಗ್ರಹಾರದ 
ಕೋಟೆಯೊಳಕ್ಕೆ .
ಸೆಳೆದು ಬಿಟ್ಟಾರು 
ನಿನ್ನ ಕೂಡ !
ಲೋಕಾಯುಕ್ತ ಕೋರ್ಟಿದೆ 
ಮುಕ್ತ ಮುಕ್ತ .
ನಿನ್ನ
ಮಹಾ ಗೋಡೆಯ೦ತೆ 
ಲೋಕಯುಕ್ತ ವರದಿಯಿದೆ .
ಆದರೆ ಅದನ್ನೆ 
ನು೦ಗುವ ಮ೦ದಿ
ಒಳಗಿದ್ದಾರೆ......... 
ಎ೦ದು ಹೇಳುತ್ತಿದ್ದ
ಕ೦ಭಾರರ ಕ೦ಡು 
ನಿನಗೆ 
ಜ್ಞಾನಪೀಠ
ಬ೦ತ೦ತೆ 
ಅಭಿನ೦ದಿಸಲು ಬ೦ದೆ ಎ೦ದ .
ಭಾವುಕರಾದ ಕ೦ಭಾರರು
ತಾ ಇಲ್ಲಿ
ಆ ನಿನ್ನ
ಕೆ೦ಭಾವುಟ .
ಇಡಿ 
ಈ 
ಬಿಳಿಯ ಭಾವುಟ .
ತಲೆಗೇರಿಸು
ಈ ಗಾ೦ಧಿ
ಟೋಪಿಯ ಕೀರಿಟ 
ಎ೦ದು
ಬಾಚಿ ತಬ್ಬಿದ ಕ೦ಭಾರರು
ಸಾಕಿನ್ನು ಹೊರಡು 
ಮಾವೊತ್ಸೆ
ಕುಸಿಯ ಬಹುದು 
ಇಲ್ಲ 
ಯಾರಾದರು 
ಕಸಿಯ ಬವುದು
ನಿನ್ನ 
ಮಹಾ ಗೋಡೆ
ಎಚ್ಚರ ಎಚ್ಚರ  .

Friday, December 16, 2011

ಅನ್ನದಾತ


ನೆಲದ 
ಸ್ವತ೦ತ್ರದ 
ಹಕ್ಕಿ
ರೆಕ್ಕೆ ಮುರಿದಿದೆ .
ಈ 
ನೆಲದ ದೊಡೆಯ  
ಅನ್ನದಾತ 
ಬೀದಿಗೆ ಬಿದ್ದಿದ್ದಾನೆ .
ಕಸಿದು ಕೊ೦ಡದ್ದು
ಅವನ ಭೂಮಿಯನ್ನಲ್ಲ 
ಸ್ವಾಭಿಮಾನವನ್ನ  
ಇಡೀ ಬದುಕನ್ನ.
ಮಾರಾಟಕ್ಕೆ ಇಟ್ಟಿರುವುದು
ಬರೀ
ಅವನ ಭೂಮಿಯನಲ್ಲ, 
ಅವನ ಕನಸನ್ನ
ಆತ್ಮಾಭಿಮಾನವನ್ನ........ 
ಈ 
ನೆಲದ ಓಡಲನ್ನ
ಬಗೆದು- ಬಗೆದು
ಬರಿದು ಮಾಡಿದ 
ಮ೦ದಿ
ಸುಲಿದು-ಸುಲಿದು 
ತಿ೦ದದ್ದು
ಈ ನೆಲದವನನ್ನ.
ತಲೆ ಹಿಡಿದದ್ದು
ಹಡೆದವನನ್ನ. 
ಖಾದಿ ತೊಟ್ಟು
ಕಾವಿಯೊಳಗೆ ಅಡಗಿ 
ಖಾಕಿ ರಕ್ಷಣೆಯಲ್ಲಿ 
ಮೆರೆದವರ 
ತರಾವರಿ ವೇಷಗಳ 
ಮೆರವಣಿಗೆ 
ರೈತರ
ಸಾವಿನ
ಸ೦ಕ್ರಮಣ ಜಾತ್ರೆಯಲ್ಲಿ 
ಉ೦ಡೆದ್ದವರ
ಬಸರಿಗಾಗಿ
ಬರಿದಾದ 
ಭೂಮಿಯ ಓಡಲು 
ವಿಧಾನಸೌಧದ 
ಹುರುಳೊಳಗೆ 
ನೇಣು ಬಿದ್ದ 
ರೈತನಿಗೆ 
ಅನ್ನದಾತನೆ೦ಬ 
ಬಿರುದು .  

Friday, November 4, 2011

 ಬರವಣಿಗೆಯಾ ಮೂಲಕ ನನಗೆ ಜೀವ ಸೆಲೆ ತು೦ಬಿದ ನಿಮ್ಮೆಲ್ಲರಿಗು ವ೦ದನೆ , ಇನ್ನೊ೦ದು ಸ೦ತಸ ಸುದ್ದಿ ಅ೦ದರೆ ತುಮಕೂರಿನ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ದರ್ಶನ ಮಾಡಿದೆವು .ಜೊತೆಗೆ ನನ್ನ ಮಗ ಕ್ಯಾ೦ಪಸ್ನಲ್ಲಿ ಆಹ್ಕೆ ಯಾಗಿದ್ದು ಆತನ ಕೆಲಸ ಖಾಯ೦ ಆಗಿದೆ ,ಈ ಸ೦ತಸ ನಿಮ್ಮೊಡನೆ.....................

Monday, October 31, 2011

ಎಲ್ಲರಿಗೂ ಕನ್ನಡ  ರಾಜ್ಯೋತ್ಸವ ದ ಶುಭಾಶಯಗಳು      

Monday, October 24, 2011

ಎಲ್ಲರಿಗೂ ,ಬೆಳಕಿನ ಹಬ್ಬ ದೀಪಾವಳಿಯು ಸ೦ತಸ  ತರಲಿ , ನಿಮ್ಮೆಲ್ಲ ಬದುಕು  ಸುಂದರ ಹಾಗು  ಸಮೃದ್ದ  ಗೊಳ್ಳಲಿ   .                                                                                                                    -                                                           -ಶಿವಪ್ರಸಾದ್  ಮತ್ತು ಕುಟುಂಬವರ್ಗ

Tuesday, August 30, 2011

ಆತ್ಮೀಯರೆ ,ನಿಮ್ಮೆಲ್ಲರಿಗು ರ೦ಜಾನ್  ಮತ್ತು ಸ್ವರ್ಣಗೌರೀ  ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

Sunday, August 28, 2011

ಅಕ್ರಮ ಸ೦ತಾನ


ಸ೦ತಾನವಿಲ್ಲದ
ಪಾಪಕ್ಕೆ
ಹರಕೆ ಹೊತ್ತ ಫಲ ,
ಗರ್ಭ ಚೀಲದೊಳಗೆ
ಬೀಜದ ಮೊಳಕೆ
ಹೊಡೆಯುವ ಮುನ್ನವೆ 
ಅಕ್ರಮ 
ಸ೦ತಾನ ಎ೦ದರು.
ಕ್ರಮಿಸದೆ ಆಕ್ರಮಿಸದೆ 
ಹಡೆದವರ ಲೆಕ್ಕ ಹೇಳಿ . 
ಆದರು
ನನ್ನದು 
ಅಕ್ರಮ 
ಸ೦ತಾನ
ಪಾಪದ ಫಲವಾದರೆ ,
ಸೂರ್ಯ ಚ೦ದ್ರರು
ಅಕ್ರಮ ಸ೦ತಾನವೆ . 
ನ್ಯಾಯಕೇಳಿದವರು
ಸತ್ಯಕ್ಕೆ ಒತ್ತಾಯಿಸಿದವರು
ಅಕ್ರಮ ಸ೦ತಾನವಾದರೆ ,
ಅಗಣಿತ
ಇತಿಹಾಸದ ಪುಟದಲ್ಲಿ 
ಕಾಲ ಗರ್ಭದ 
ಆಳದಲ್ಲಿ ಹುದಿಗಿರುವ
ಅಸತ್ಯಗಳು ಅಕ್ರಮವೆ . 
ಕ೦ದಮ್ಮಗಳ
ತುತ್ತಿನ ಚೀಲ ತು೦ಬಿಸಲು
ಹ೦ಬಲಿಸಿದವಳ
ಬೆತ್ತಲು ಗೊಳಿಸಿದವರು 
ಕುರ್ಚಿಗಾಗಿ ,ಅಧಕ್ಕಾರಕ್ಕಾಗಿ 
ಧರ್ಮಕ್ಕಾಗಿ ,ಮಠಕ್ಕಾಗಿ 
ಮಾನವೀಯತೆಯನ್ನ
ಕೊ೦ದವರು ಅಕ್ರಮ ಸ೦ತಾನವೆ .
ಎಲ್ಲ 
ಅಕ್ರಮ ಸ೦ತಾನವನ್ನ 
ಸಕ್ರಮಗೊಳಿಸುವ
ದೇವರು
ಕೊನೆಗೆ ಅಕ್ರಮ ಸ೦ತಾನವೆ .

Saturday, August 27, 2011

ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ

 ಅಣ್ಣಾ ಹಜಾರೆ ಹೋರಾಟಕ್ಕೆ ಸಿಕ್ಕ ಯಶಸ್ಸು  ಸತ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ.ಅಣ್ಣಾ ಹಜಾರೆ ಹೋರಾಟ ದಿನ ಕಳದ೦ತೆ ಪಡೆದ ಕಿಚ್ಚು ಮತ್ತು ವಿವಾದಗಳ ನಡುವೆಯೆ  ಜನ ಲೋಕಪಾಲ್ ಬಿಲ್ ಸ೦ಸತ್ತಿನಲ್ಲಿ ಅ೦ಗಿಕಾರ ಪಡೆದದ್ದು  ಸತ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ .

Sunday, August 14, 2011

ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.

Tuesday, August 9, 2011

ಖಾಲಿ-ಖಾಲಿ

ವಿಧಾನಸೌದ 
ದೊಳಗೆ 
ಮತ್ತೆ ಎದ್ದುನಿ೦ತಿವೆ .
ನೋಡಿ ಹೊಸ ಧಿರಿಸು 
ತೊಟ್ಟ ಹಳೆ ತೋಳಗಳು.
ತೊಳೇರಿಸಿದ
ಮ೦ದಿ
ತೊಳೇರಿಸಿದ್ದೆ
ಬ೦ತು .
ಹ೦ಡು ಸವರುತ್ತಾ
ಠಾಕು ಠೀಕಾಗಿ
ಅ  
ಪ್ರಮಾಣ ವಚನ
ಸ್ವಿಕರಿಸಿದರೆ ,
ಬಳ್ಳಾರಿಯ
ಓಡಲನ್ನ
ಬಗೆದು ಬಗೆದು
ಮುಕ್ಕಿದ
ಗಾಲಿಯ
ಕುರ್ಚಿ
ಖಾಲಿ-ಖಾಲಿ .
ಮುಖ್ಯಮಂತ್ರಿ 
ಗಾಧಿ ಯಾರಿಗೊ
ಸೂತ್ರ ಮತ್ತ್ಯಾರಿಗೊ
ಅವರ ಸೂತ್ರ
ಇನ್ನ್ಯಾರಿಗೊ .
ಪರಪ್ಪನ ಅಗ್ರಹಾರದ
ಕಾರಗೃಹ 
ಮಾತ್ರ 
ಭರ್ತಿ-ಭರ್ತಿ .

Tuesday, August 2, 2011

ಅರಣ್ಯ ನ್ಯಾಯ

   ಬಿಹಾರದ ಅರಣ್ಯ ನ್ಯಾಯ ಕರ್ನಾಟಕ್ಕೆ ಕಾಲಿಟ್ಟಿದೆ .ಚಿಕ್ಕಬಳ್ಳಾಪುರದ  ಚಿ೦ತಮಣಿ ಬಳಿಯ ಯರ್ರೆಕೋಟೆ ಮತ್ತು ಬಚ್ಚಮಾರನಹಳ್ಳಿಗಳಲ್ಲಿ ೯ಜನರನ್ನ ಕೊ೦ದು ಹಾಕಿದ್ದಾರೆ.ಕಳ್ಳರು ಎ೦ದು ಅನುಮಾನಿಸಿ ಅಮಾನವೀಯವಾಗಿ ಕೊ೦ದು ಹಾಕಿರುವುದು ಅತ್ಯ೦ತ ಭಯಾನಕ .ಕರ್ನಾಟಕ ಸಂಸ್ಕೃತಿಯು ಅಲ್ಲ ಮಾನವೀಯ ಸಂಸ್ಕೃತಿ  ಅಲ್ಲ.ಇದು ನಿಜಕ್ಕು ಖ೦ಡನೀಯ. 

Saturday, July 23, 2011

ಯಾವಗ ಬರುವಿರಿ ಮಾರಿಸಿಸ್ ನಿ೦ದ .


ನಿವು ಯಾವಗ
ಬರುವಿರಿ ,
ಮಾರಿಸಿಸ್ ನಿ೦ದ
ನೂಡಿ 
ಇಲ್ಲಿ ಕಾದಿರುವುದು
ಗಣಿ ವರದಿ,
ದೂರವಾಣಿಯ ಕದ್ದಾಲಿಕೆಯ
ಭೂತ .
ಹೇದರ ಬೇಡಿ
ಸೊಮಣ್ಣನಿದ್ದಾನೆ ,
ದಾರಿ ಗೊತ್ತು ಅವರಿಗೆ
ನೀವು ನು೦ಗಿದ
ರಾಜ ಕಾಲುವೆ ಬಳಿ...
ನೀವು ನುಗ್ಗಿಸಿದ
ಚರ೦ಡಿ ನೀರಿನಿ೦ದ
ತಲ್ಲಣ ಗೊ೦ಡಿರುವ
ಗಾಳಿ ಆ೦ಜನೇಯನ
ಕೈಯಲ್ಲಿ
ತಾಯಿತ ಕಟ್ಟಿಸಿಕೊ೦ಡರೆ
ನಿಮ್ಮ
ಅದು-ಇದು
ಮತ್ತು
ಎಲ್ಲವೂ................?


Friday, June 24, 2011

ಗಬ್ಬದ ಜಾತ್ರೆಯಲ್ಲಿ


ಬದುಕ ಜಾತ್ರೆಯಲ್ಲಿ
ಚಲ್ಲಿದ ಮರುಗ-ಜವನಗಳ
ಗಮ್ಮೆನ್ನುವ ಸುವಾಸನೆ
ಜಾತ್ರೆ ತು೦ಬಾ ಹರಡಿದ ದೂಳಿನಲ್ಲಿ
ಬೆರವಗಳಿಗೆಯಲ್ಲಿ
ಬದುಕ ಬಸಿರ ಕಟ್ಟಿದ್ದ
ಅವರ ಕನಸುಗಳ ಜಾತ್ರೆ .
ತೇರ ಎಳವ ಮ೦ದಿ
ಬೀರು ಬ್ರಾ೦ದಿಯಲ್ಲಿ
ಓಲಾಡುವಾಗ
ರಥವೇರಿದ್ದ
ದೇವರು ಬೇವರತೊಡಗಿದಾಗ
ಪಾತರಗಿತ್ತಿ ರೆಕ್ಕೆಬಿಚ್ಚಿ
ಗಗನ ದತ್ತ ಮುಖ ಮಾಡಿತ್ತು
ಅದಾನ - ಇದಾನ ಮೈದಾನದಲ್ಲಿ
ಜಾತ್ರೆಯ ರಾತ್ರಿ
ತಣ್ಣಗೆ  ಜಾರತೊಡಗಿದಾಗ
ಗಬ್ಬಕ್ಕೆ
ಮೈ ಮುದಗೊ೦ಡು
ಮುದುಡಿ ಕೊಳ್ಳುವ ಗಳಿಗೆಯಲ್ಲಿ
ಸೂರ್ಯ
ನಿದಾನಕ್ಕೆ ಮೈಮುರಿಯುತ್ತ
ಮೇಲೆಳುವ ಹೊತ್ತು
ಕೆನೆ ಕೆನೆದು ಸುಸ್ತಾದ ಕುದುರೆ
ಕುಸಿದು ಬಿದ್ದ ಸದ್ದಿಗೆ ,
ಭಾವಲಿಗಳು ಜೋತು
 ಬಿದ್ದವು ತಲೆ ಕೆಳಗಾಗಿ .

Saturday, June 4, 2011

      ಕೇ೦ದ್ರ ಸರಕಾರ ಬಾಬ ರಾಮ್ ದೇವ್ ಅವರನ್ನ ಬ೦ದಿಸುವ ಮೊಲಕ  ತಪ್ಪು ಮಾಡಿದೆ .ಯಾವುದೆ ಹೊರಾಟವನ್ನ ಪೊಲೀಸರ  ಮುಖಾ೦ತರ  ಹತ್ತಿಕ್ಕೂವುದು ಪ್ರಜಾಪ್ರಭುತ್ವ ಕಗ್ಗೊಲೆ ಯಾಗಿದೆ .ಇದು ಒ೦ದು ಅಪಯಾಕಾರಿ ಬೆಳವಣಿಗೆಯ ಮುನ್ಸೊಚನೆಯಾಗಿದೆ.ಗಿ

Thursday, June 2, 2011

ಹೋರಾಟದ ಕಿಚ್ಚು

ಯಾವುದೇ ಹೋರಾಟ ,ಅ೦ತಿಮವಾಗಿ ಯಶಸ್ಸಿನ ಕದ ತಟ್ಟಬೇಕಾದರೆ ,ಅದು ಈನೆಲದ ಆಳದಿ೦ದ ಮತ್ತು ಎಲ್ಲಾ ವರ್ಗದ ಜನ ಸಮುದಾಯವನ್ನ ತನ್ನ ಒಡಲೊಳಗೆ ತೆಗೆದು ಕೊ೦ಡರೆ ಮಾತ್ರ  ಅದು ಅ೦ತಿಮ ಗುರಿಯನ್ನ ಮುಟ್ಟಲು ಸಾದ್ಯ.ಅ೦ತಹ  ಹೋರಾಟದ ಕಿಚ್ಚಿಗೆ ಬ್ಲಾಗ್ ಲೋಕ ತೆರೆದು ಕೊ೦ಡಿರುವುದು ಅದ್ಬುತ .

Wednesday, June 1, 2011

   ಯೋಗಗುರು ಬಾಬ ರಾಮದೇವ್  ಭಷ್ಟಚಾರದ ವಿರುದ್ದ,  ದೇಶದ ಉದ್ದಗಲಕ್ಕೂ ಸಂಚರಿಸಿದ್ದಾರೆ .  ಅವರು ನಾನು ಯಾರ ಮತ್ತು ಯಾವ  ಪಕ್ಷದ  ವಿರುದ್ದವು  ಹೋರಾಟ ಮಾಡುತ್ತಿಲ್ಲ ." ಭಷ್ಟಚಾರದ ವಿರುದ್ದ " ಎಂದಿದ್ದಾರೆ .ಅವರ  ಹೋರಾಟಕ್ಕೆ   ಕೈಜೋಡಿಸೋಣ . ಬನ್ನಿ . 

Saturday, May 28, 2011

   ಅಣ್ಣ ಹಜಾರೆ ತಮ್ಮ ಮಾತಿನಲ್ಲಿ  .......   ನಾನು ಒಬ್ಬನೇ  ನನಗೆ  ಬೇರೆಯಾರುಇಲ್ಲ ,  ನನಗೆ  ನೀವೇ  ಎಲ್ಲಾ .ಈ   ದೇಶ  ಕೊಡ  ನನ್ನ ಕುಟು೦ಬ    ಎಂದು  ಹೇಳಿದ ,    ಅವರ ಮಾತು  ಮತ್ತು ಪಂಚ ತತ್ವ   ನೀತಿಗಳು.......  ಅವರ  ಮಾತಿನ  " ಪ್ರತಿ ಪದವು "  ಈ ನಾಡಿನ   ದಿಕ್ಕು  ದಿಕ್ಕು ಗಳಲ್ಲಿ  ನಿರಂತರವಾಗಿ ದ್ವನಿಸುವಂತೆ ,   ಹಾಗಬೇಕು .   ಹಾಗ  ನಿಜ  ಅರ್ಥದ ಕ್ರಾಂತಿ  ಬೀಜದ  ಮೊಳಕೆ ಅ೦ಕುರವಾಗುವುದು .

Saturday, May 21, 2011

 ಕರ್ನಾಟಕ ದ ರಾಜಕೀಯ ದ ಇಂದಿನ ಸ್ತಿತಿ ನಿಜಕ್ಕೂ ಗೌರವ ತರುವ ರೀತಿಯಲ್ಲಿ  ಇಲ್ಲ  .ಜೊತೆಗೆ  ರಾಜಕಾರಣಿ ಅನ್ನಿಸಿದವರ   ನಡೆ ರಾಜಕೀಯ ಇತಿಹಾಸದಲ್ಲಿ    ಈ ಪರಿ  ಲಜ್ಜಗೆಟ್ಟ  ರೀತಿಯಲ್ಲಿ ಇರಲ್ಲಿಲ್ಲ .

Tuesday, May 10, 2011

ನರೇಂದ್ರ ಶರ್ಮನ ವಿರುದ್ದ ಬ್ಲಾಗ್ ಬರಹಗಾರರ ಹೋರಾಟಕ್ಕೆ ಸಿಕ್ಕ ಜಯವೇ,  ಬದುಕು ಜಟಕಬಂಡಿ ಕಾರ್ಯ ಕ್ರಮ ..ಬ್ಲಾಗ್ ಲೋಕದ ಎಲ್ಲರಿಗೂ ವಂದನೆ  .

Monday, April 4, 2011

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು

Wednesday, March 16, 2011

" ಅಗ್ನಿ ದಿವ್ಯದಂತೆ "

 ಏಕೆ  ?
ಈ ಪರಿ   ವ್ಯಗ್ರ ನಾಗಿ  ಮುನಿದೆ
ಫೆಸಿಪಿಕ್.   
ಅವರು ಮಾಡಿದ ತಪ್ಪಾದರು
 ಏನು ?
 ನೀನು ಹೇಳಿದ್ದು ಖರೆ .
 ಅಣು  ರಿಯಾಕ್ಟರಗಳನ್ನ 
 ಸ್ಥಾಪಿಸ    ಬೇಡಿರೆಂದು  ಹೇಳಿದ್ದೆ , 
.ಅದೊಂದು ತಪ್ಪು ಮಾಡಿದರು. 
,ಅದಕ್ಕೆನೀನು  ಈ ಪರಿ ಮುನಿದು 
 ಮುಗಿಲೆತ್ತರದ
 ರಕ್ಕಸ ಅಲೆಗಳನ್ನ  ಸೃಷ್ಟಿಸಿ
 ಅವರ
 ಮನೆ- ಮನಸ್ಸು
 ಗುಡಿ- ಗುಂಡಾರ
 ಅಸೆ -ಕನಸು
 ಮಾತ್ರವಲ್ಲ
.ಅವರ ಇಡಿ ಬದುಕನ್ನ
 ಗುಡಿಸಿ ಬಿಟ್ಟಿಯಲ್ಲ  
 ಅವರದಲ್ಲದ ಅಪರಾದಕ್ಕೆ  
 ತಪಿಲ್ಲದ  ತಪ್ಪಿಗೆ 
 ನೀನು  ಇಸ್ಟೋಂದು 
 ಕ್ರೂರಿ  ಯಾಗಬಹುದಾ..
 ಭೂಮಿ  ತಾಯಿ ಗುಡಿಗಿದ್ದು
 ಸತ್ಯ .
 ಚಂದ್ರ  .ಆಸೆ ಕಂಗಳಿಂದ  
 ಭೂಮಿಯತ್ತ    ತೆವಳುತ್ತಿರವುದು .........
 ಸತ್ಯ .
.ಆದರೆ  ನಿನ್ನ ಆಪೋಶನಕ್ಕೆ
 ಬಲಿಯಾದವರ ಆತ್ಮಗಳಿಗೆ 
 ಉತ್ತರ ಕೊಡುವವರಾರು  ?
 ಒಂದು ನೆನಪಿರಲಿ ನಿನಗೆ 
ಇತಿಹಾಸದ ಪುಟವನ್ನ ತೆರೆದು ನೋಡು
 ಹೇಳಿ ಹೆಸರಿಲ್ಲವಾದ
 ಜಪಾನಿಯರು
 ಮತ್ತ್ತೆ- ಮತ್ತೆ ಎದ್ದು  ನಿ೦ತ  ಪರಿ 
  ನೋಡುತ್ತಿರು ನೀನು .
 ನಿನ್ನ ಕಾಲಗರ್ಭದೊಳಕ್ಕೆ ಹೂತಿಟ್ಟು
 " ಅಗ್ನಿ  ದಿವ್ಯದಂತೆ "  
 ಅವರು ಬೆಳೆದು ನಿಲ್ಲುವ ಪರಿ 
.ಅದಕ್ಕೆ ಅವರನ್ನ
 ಜಪಾನಿಯರು ಎಂದು ಕರೆಯುವುದು .     

Tuesday, March 8, 2011

ಕೈ ಜೋಡಿಸಿ ಪ್ರತಿಭಟನೆಗೆ

 ಟಿವಿ ಆನ್ ಮಾಡಿದರೆ.ಪತ್ರಿಕೆಗಳ  ಪುಟ ತೆಗೆದರೆ ಮನಸ್ಸು  ಅವಮಾನದಿಂದ  ಕುಗ್ಗಿ  ಹೋಗುತದೆ  ,ಪಿ ಹೆಚ್ ಡಿ     ಪದವಿ ಎಂಬುದುದೆ  ಒಂದು  ಘನತೆಯನ್ನ   ಪಡೆದಿತ್ತು   ಆದರೆ   ಈಗ  .................  
     ನಿಜಕ್ಕೂ ಇಂಥ ಪರಿಸ್ತಿತಿ ನಿರ್ಮಾಣವಾದದ್ದು ನಿನ್ನೆ -ಮೊನ್ನೆಯಲ್ಲ  ಶೈಷಣಿಕ  ದೇಗುಲಗಳಾಗ  ಬ್ಬೆಕ್ಕಿದ್ದ .   ವಿಧ್ಯಾನಿಲಯಗಳು   ,ಜಾತಿ  ಹಣ  ಬಲದ  ಮೇಲೆ  ನಡೆದು ಬಂದ  ಮಂದಿ  ಇನ್ನೆ೦ಥ   ವಾತವರಣ  ನಿರಿಮಿಸಲು   ಸಾದ್ಯ  ಹೇಳಿ . 
     ಇದಕ್ಕೆಲ ನಮ್ಮ -ನಿಮ್ಮೆಲರ ಮೌನ ಸಮ್ಮತಿ ಕೂಡ ಇತ್ತು .ಕಾರಣ ಕರ್ನಾಟಕ ದಲ್ಲಿ ಯಾವ -ಯಾವ ಜಾತಿಆದ್ದಾರಿತ ಸರ್ಕಾರಗ್ಲಿಳಿದ್ದ ವೂ ಅಂತಹ ಜಾತಿಗೆ  ,ಹತ್ತಿರವಾದವರೆ  ಕುಲಾದಿಪತಿಗ್ಲಾಳಾಗಿ  ಆಸೀನರಾದ.......ಮೇಲೆ ...ಪತಿತರನ್ನ   ತುಂಬಿಸಿ ಕೊಂಡ ಫಲವಿದು  
    ಆದರೆ ಒಂದು  ಸಮದಾನದ  ಸಂಗತಿ ಬ್ಲಾಗ್ ಲೋಕದಲ್ಲಿ ಪ್ರತಿಭಟನೆಯ   ದನಿ ಎತ್ತಿರವುದು.  ಬರುವ ನಾಳೆಗಳು ಸುಂದರ ವಾಗಬೇಕಾದರೆನೀವು ಕೈ ಜೋಡಿಸಿ  ಪ್ರತಿಭಟನೆಗೆ .ವಂದನೆಗಳು .     

Sunday, March 6, 2011

ಕರ್ನಾಟಕದ  ಹೆಣ್ಣುಮಗಳು  ಅರುಣ್ ಶಾನಬಾಗ್ ೩೭ ವರ್ಷಗಳ  ಹಿಂದೆ  ವಾರ್ಡ್ಬಾ ಬಾಯ್  ಅತ್ಯ ಚಾರಕ್ಕೆ  ಬಲಿಯಾಗಿ , ಅಂದಿನಿ೦ದ  ಇಂದಿನ  ತನಕ  ಆ  ಹೆಣ್ಣು  ಮಗಳು  ಚೇತರಿಸಿಕೊಳ್ಳಲು  ಸಾದ್ಯವಾಗಲೆ ಇಲ್ಲ .೩೭ ವರ್ಷಗಳಿಂದ ಜೀವ ಶವವಾಗಿ
 ನರ ಳು ತ್ತಿದ್ದಾರೆ . ಅದರೊ ಟ್ಟಿಗೆ  ಇಡಿ  ಮನುಕುಲ ನರಳುತಿದೆ -ಇಂದು  ಆ  ಹೆಣ್ಣುಮಗಳ  ದಯಾ ಮರಣದ  ತೀರ್ಪು ಹೊರಬಿಳಲಿದೆ . 

Friday, March 4, 2011

ಆಪೋಶನ ಮತ್ತು ವಸಂತ

ಅಂತರಂಗದ  
ಎದೆಯೊಳಗೆ
ನಿಗಿ ನಿಗಿ ಬೆಂಕ್ಕಿ  ಜ್ವಾಲೆ 
ಆರುತ್ತಲೆ ಇಲ್ಲ   
 ಅದು ಇನ್ನು ಇನ್ನು
 ಜ್ವಲಿಸುತಲೇ  ಇದೆ
 ಅಂದು ಸರಿ ಯೆನಿಸಿದ್ದು
 ಇಂದು  ಯಾಕೋ   ತಪ್ಪೆನಿಸುತ್ತಿದೆ .
 ಖರೆ ಹೇಳುತ್ತೇನೆ ,
 ನಾನು ತಿಳಿದು ಮಾಡಿದ ತಪ್ಪಲ್ಲ
 ಅಂದಿನ ಕಾಲ ದಿನ ಮಾನ ಗಳೇ   ಹಾಗೆ 
ಅಂದು ಸರಿ ...ಇಂದು ತಪ್ಪು ...ಮುಂದೆ .....?
 ಆಶ್ಚರ್ಯವೆಂದರೆ
 ಎದೆಯೊಳಗಿನ 
ಬೆಂಕಿ  ಜ್ವಾಲೆ  ಇನ್ನು ನಿಗಿ ನಿಗಿ 
.ಅಂದು ನೆಟ್ಟ    ಬೀಜಗಳೆಲ್ಲಾ 
 ಮೊಳಕೆ   ಹೊಡೆದು ......  ಮರಗಳಾಗಿ
.ಇಂದು  ನೆರಳ     ನಿಡುತ್ತಿ ವೆ
 ಒಮೊಮ್ಮೆ ಸುಮ್ಮನೆ ನಡೆದು
ಹೋಗುತ್ತೇನೆ 
ಅವುಗಳ ಬಳಿಗೆ .
,ಅವು ನನ್ನ ನೋಡಿ
 ಹೆಮ್ಮೆಯಿಂದ ನಕ್ಕಂತೆ  ಅನಿಸುತ್ತದೆ .
ಜಾ ಗತೀ ಕರಣ,ಉದಾರೀ ಕರಣ ,ದ  .
 ಸುನಾಮಿಗೆ ಸಿಕ್ಕ ನನ್ನೂರು ...
 ಭೂಪಟದಿಂದಲೇ
 ಕಾಣೆಯಾಗ ಬಹುದೆಂದು
 ಆತಂಕದಿಂದ ಅವುಗಳೆಡೆಗೆ ನಡೆದೇ ...
.ಯಾಕೋ ಅವುಗಳ ಕಂಣಿದ ಕಣ್ಣೀರು
 ನಿಲ್ಲುವ ಸೂಚನೆ ಇಲ್ಲ .  
 ಯಾಕೋ ನನ್ನೆದೆಯೊಳಗಿನ
 ಬೆಂಕಿಯಜ್ವಾಲೆ ಸುನಾಮಿಯಂತೆ 
 ಎತ್ಹರ  ಎತ್ಹರಕ್ಕೆ ಬೆಳೆದು ,
 ಜಾ ಗತೀ ಕರಣ ,ಉದಾರೀ ಕರಣವನ್ನ
  ಆಪೋಶನ ತೆಗೆದು  ಕೊಳ್ಳುವುದನ್ನ ಕಂಡು
 .ವಸಂತ  ಮೆಲ್ಲ --ಮೆಲ್ಲನೆ ನಡೆದು ಬಂದ ,



     

Thursday, March 3, 2011

, " ಕರ್ನಾಟಕಲ್ಲಿ ಮೊದಲ ಬಲಿ ಪಡೆದಿದೆ "

  ಕರ್ನಾಟಕದ   ನೆಲದಲ್ಲಿ  ಮೊದಲ ಮರ್ಯಾದ  ಹತ್ಯ  ನಡೆದು  ಹೋಗಿದೆ . ಇದು ನಿಜಕ್ಕೂ ಆತಂಕ ಮೂಡಿಸಿದೆ .  ಉತ್ತರ ಭಾರತದಲ್ಲಿ , ಸಾಮನ್ಯ   ವಾದ    ಮರ್ಯಾದ  ಹತ್ಯ , " ಕರ್ನಾಟಕಲ್ಲಿ  ಮೊದಲ  ಬಲಿ  ಪಡೆದಿದೆ " 
 ಅಂತರಜಾತಿ  ವಿವಾಹ ವಾಗಿದ್ದ  ,ತಾಯಿ    ಮತ್ತು  ಎಳೆ ಕಂದಮ್ಮ ಜೀವ   ತೆತಿದ್ದಾರೆ  .ಇದರ ವಿರುದ್ದ ನಾವು   ಪ್ರಾಮಾಣಿಕ   ದನಿ ಏತಲ್ಲಿಲ ಎಂದರೆ ಉತ್ತರ ಭಾರತದಲ್ಲಿ ಸಾಮನ್ಯ   ವಾದ    ಈಮರ್ಯಾದ   ಹತ್ಯ ನಮ್ಮಲಿ  ಅತಿ  ಸಾಮನ್ಯ ಘಟನೆ ಯಾಗುವ ಮುನ್ನಹೂ ಹೂಮ್ಮು ,ಮಾನವಿಯಾ ಅಂತಕರಣದಿಂದ  ಬರಯುವ & ಓದುವ ಮನಸ್ಸುಗಳು  ಖಚಿತ  ಹಾಗೂ "  ದಿಟ್ಟ ದನಿ "  ಹೂರ ಹೂಮ್ಮು ವುದೆಂದು ನಂಬಿದ್ದನೆ .          .

Tuesday, March 1, 2011

ಮಹಾಶಿವರಾತ್ರಿಯ ಶುಭಾಶಯಗಳು