" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Tuesday, July 30, 2013

    ಕೆ ಜಿ ಗೆ ಒಂದು ರೂ ಅಕ್ಕಿ

ನಿಮ್ಮ ಸ್ವಾರ್ಥಕ್ಕೆ 
ನಮ್ಮ ಸ್ವಾಭಿಮಾನ 
ಕಸಿದು  ಕೊಂಡವರೆ 
ಧಿಕ್ಕಾರವಿರಲಿ ನಿಮಗೆ .
ಈ ನೆಲದ 
ನಿಜ ವಾರಸುದಾರರು ನಾವು 
ಇಲ್ಲಿನ ಸಮಸ್ತಕ್ಕು
ನಾವೆ ಹಕ್ಕುದಾರರು 
ನೀವು ನೀಡುವ
ಕೆ ಜಿ ಗೆ ಒಂದು ರೂ ಅಕ್ಕಿ 
ಬಿಕ್ಷೆಯಲ್ಲ 
ಅದು ನೀವು 
ಶತಮಾನಗಳಿಂದ 
ನಮ್ಮನ್ನ ತಿಂದು ತೇಗಿದಕ್ಕೆ
ಕಟ್ಟುವ ದಂಡ . 
ಎಚ್ಚರವಿರಲಿ ನಿಮಗೆ 
ನಮಗೆ ತಿಳಿದಿದೆ 
ನಿಮ್ಮ ಅನುಕಂಪದ 
ಹಿಂದಿನ ಹುನ್ನಾರ 
ನಮಗೆ ಬೇಕಿರುವುದು 
ನೀವು ಕಸಿದುಕೊಂಡ 
ಅಕ್ಷರ ,ಸ್ವಾತಂತ್ರ್ಯ,  ಸ್ವಾಭಿಮಾನ  
ಮಾತ್ರ 
ಅದಕ್ಕೆ ನಾವು 
ಬಿತ್ತುತ್ತಿದ್ದೇವೆ 
ಸಮತೆಯ ಬೀಜ 
ಆಗ ನಾವು 
ನಿಡಲಿದ್ದೇವೆ ನಿಮಗೆ 
ಉಚಿತ ಅಕ್ಕಿ . 

Friday, July 19, 2013

ಗಂಗೆಕ್ಷಮೆಯಾಚಿಸು

ಏನು ಶಿವ 
ನಿನ್ನ ಸ್ಥಿತಿ
ಏಕೆ ಹೀಗಾಯಿತು
ಗಂಗೆ ಏಕೆ 
ಈ ಪರಿ ರೌದ್ರಾವತಾರ 
ತಾಳಿದಳು
ನಿನ್ನ ಮೇಲಿನ ಸಿಟ್ಟಿಗೆ 
ನಿನ್ನ ನಂಬಿದವರನ್ನ
ಆಪೋಷಣ
ತೆಗೆದು ಕೊಂಡಳಲ್ಲ 
ಭೂಮಿ ಆಕಾಶ ಗಳು
ಅವಳ ಸಿಟ್ಟಿಗೆ
ಏಕಾದ ಪರಿ ಕಂಡು
ದೇವ ಭೂಮಿಯಒಡಲು 
ಬರಿ ದಾಯಿತಲ್ಲ
ದೇವ .
ಹುಲು ಮಾನವರಿರಲಿ
ನಿನ್ನನೆ  
ನೀರಲ್ಲಿ ಮುಳುಗಿಸಿದಳಲ್ಲ
ಆ 
ನಿನ್ನ ಗಂಗಾಮಾಯಿ . 
ಬಿಡು ನೀನು
ಅವಳನ್ನ ಚನ್ನಾಗಿ 
ಗಮನಿಸಿದಂತೆ ಕಾಣುತ್ತಿಲ್ಲ . 
ಅದಕ್ಕೆ 
ಈ ಪರಿ ದುರಂತ 
ನಿನ್ನ ದೇವ ಭೂಮಿಯ
ತುಂಬೆಲ್ಲ್ಲಾ 
ಹೆಣಗಳ ರಾಶಿ ರಾಶಿ .
ನೋ೦ದವರೆಷ್ಟೋ
ಕಾಣೆಯಾದವರೆಷ್ಟೋ
ಅನಾಥರಾದವರೆಷ್ಟೋ.... ,
ನಿನ್ನ ನಂಬಿ ಬಂದವರಲ್ಲ ಅವರು ! 
ಪಾಪ ದ ಜನ .
ನೋಡು ಶಿವ 
ಈಗಲಾದರು
ಗಂಗೆ ಬಳಿ ತೆರಳಿ
ಕ್ಷಮೆಯಾಚಿಸು . 
ನಿನ್ನ ನಂಬಿ 
ಅಳುದುಳಿದವರ 
ಬದುಕಾದರು ಹಸನಾಗಲಿ .