" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Friday, July 19, 2013

ಗಂಗೆಕ್ಷಮೆಯಾಚಿಸು

ಏನು ಶಿವ 
ನಿನ್ನ ಸ್ಥಿತಿ
ಏಕೆ ಹೀಗಾಯಿತು
ಗಂಗೆ ಏಕೆ 
ಈ ಪರಿ ರೌದ್ರಾವತಾರ 
ತಾಳಿದಳು
ನಿನ್ನ ಮೇಲಿನ ಸಿಟ್ಟಿಗೆ 
ನಿನ್ನ ನಂಬಿದವರನ್ನ
ಆಪೋಷಣ
ತೆಗೆದು ಕೊಂಡಳಲ್ಲ 
ಭೂಮಿ ಆಕಾಶ ಗಳು
ಅವಳ ಸಿಟ್ಟಿಗೆ
ಏಕಾದ ಪರಿ ಕಂಡು
ದೇವ ಭೂಮಿಯಒಡಲು 
ಬರಿ ದಾಯಿತಲ್ಲ
ದೇವ .
ಹುಲು ಮಾನವರಿರಲಿ
ನಿನ್ನನೆ  
ನೀರಲ್ಲಿ ಮುಳುಗಿಸಿದಳಲ್ಲ
ಆ 
ನಿನ್ನ ಗಂಗಾಮಾಯಿ . 
ಬಿಡು ನೀನು
ಅವಳನ್ನ ಚನ್ನಾಗಿ 
ಗಮನಿಸಿದಂತೆ ಕಾಣುತ್ತಿಲ್ಲ . 
ಅದಕ್ಕೆ 
ಈ ಪರಿ ದುರಂತ 
ನಿನ್ನ ದೇವ ಭೂಮಿಯ
ತುಂಬೆಲ್ಲ್ಲಾ 
ಹೆಣಗಳ ರಾಶಿ ರಾಶಿ .
ನೋ೦ದವರೆಷ್ಟೋ
ಕಾಣೆಯಾದವರೆಷ್ಟೋ
ಅನಾಥರಾದವರೆಷ್ಟೋ.... ,
ನಿನ್ನ ನಂಬಿ ಬಂದವರಲ್ಲ ಅವರು ! 
ಪಾಪ ದ ಜನ .
ನೋಡು ಶಿವ 
ಈಗಲಾದರು
ಗಂಗೆ ಬಳಿ ತೆರಳಿ
ಕ್ಷಮೆಯಾಚಿಸು . 
ನಿನ್ನ ನಂಬಿ 
ಅಳುದುಳಿದವರ 
ಬದುಕಾದರು ಹಸನಾಗಲಿ . 

No comments:

Post a Comment