ಗಂಗೆಕ್ಷಮೆಯಾಚಿಸು
ಏನು ಶಿವ
ನಿನ್ನ ಸ್ಥಿತಿ
ಏಕೆ ಹೀಗಾಯಿತು
ಗಂಗೆ ಏಕೆ
ಈ ಪರಿ ರೌದ್ರಾವತಾರ
ತಾಳಿದಳು
ನಿನ್ನ ಮೇಲಿನ ಸಿಟ್ಟಿಗೆ
ನಿನ್ನ ನಂಬಿದವರನ್ನ
ಆಪೋಷಣ
ತೆಗೆದು ಕೊಂಡಳಲ್ಲ
ಭೂಮಿ ಆಕಾಶ ಗಳು
ಅವಳ ಸಿಟ್ಟಿಗೆ
ಏಕಾದ ಪರಿ ಕಂಡು
ದೇವ ಭೂಮಿಯಒಡಲು
ಬರಿ ದಾಯಿತಲ್ಲ
ದೇವ .
ಹುಲು ಮಾನವರಿರಲಿ
ನಿನ್ನನೆ
ನೀರಲ್ಲಿ ಮುಳುಗಿಸಿದಳಲ್ಲ
ಆ
ನಿನ್ನ ಗಂಗಾಮಾಯಿ .
ಬಿಡು ನೀನು
ಅವಳನ್ನ ಚನ್ನಾಗಿ
ಗಮನಿಸಿದಂತೆ ಕಾಣುತ್ತಿಲ್ಲ .
ಅದಕ್ಕೆ
ಈ ಪರಿ ದುರಂತ
ನಿನ್ನ ದೇವ ಭೂಮಿಯ
ತುಂಬೆಲ್ಲ್ಲಾ
ಹೆಣಗಳ ರಾಶಿ ರಾಶಿ .
ನೋ೦ದವರೆಷ್ಟೋ
ಕಾಣೆಯಾದವರೆಷ್ಟೋ
ಅನಾಥರಾದವರೆಷ್ಟೋ.... ,
ನಿನ್ನ ನಂಬಿ ಬಂದವರಲ್ಲ ಅವರು !
ಪಾಪ ದ ಜನ .
ನೋಡು ಶಿವ
ಈಗಲಾದರು
ಗಂಗೆ ಬಳಿ ತೆರಳಿ
ಕ್ಷಮೆಯಾಚಿಸು .
ನಿನ್ನ ನಂಬಿ
ಅಳುದುಳಿದವರ
ಬದುಕಾದರು ಹಸನಾಗಲಿ .
No comments:
Post a Comment