ಏಕೆ ?
ಈ ಪರಿ ವ್ಯಗ್ರ ನಾಗಿ ಮುನಿದೆ
ಫೆಸಿಪಿಕ್.
ಅವರು ಮಾಡಿದ ತಪ್ಪಾದರು
ಏನು ?
ನೀನು ಹೇಳಿದ್ದು ಖರೆ .
ಅಣು ರಿಯಾಕ್ಟರಗಳನ್ನ
ಸ್ಥಾಪಿಸ ಬೇಡಿರೆಂದು ಹೇಳಿದ್ದೆ ,
.ಅದೊಂದು ತಪ್ಪು ಮಾಡಿದರು.
,ಅದಕ್ಕೆನೀನು ಈ ಪರಿ ಮುನಿದು
ಮುಗಿಲೆತ್ತರದ
ರಕ್ಕಸ ಅಲೆಗಳನ್ನ ಸೃಷ್ಟಿಸಿ
ಅವರ
ಮನೆ- ಮನಸ್ಸು
ಗುಡಿ- ಗುಂಡಾರ
ಅಸೆ -ಕನಸು
ಮಾತ್ರವಲ್ಲ
.ಅವರ ಇಡಿ ಬದುಕನ್ನ
ಗುಡಿಸಿ ಬಿಟ್ಟಿಯಲ್ಲ
ಅವರದಲ್ಲದ ಅಪರಾದಕ್ಕೆ
ತಪಿಲ್ಲದ ತಪ್ಪಿಗೆ
ನೀನು ಇಸ್ಟೋಂದು
ಕ್ರೂರಿ ಯಾಗಬಹುದಾ..
ಭೂಮಿ ತಾಯಿ ಗುಡಿಗಿದ್ದು
ಸತ್ಯ .
ಚಂದ್ರ .ಆಸೆ ಕಂಗಳಿಂದ
ಭೂಮಿಯತ್ತ ತೆವಳುತ್ತಿರವುದು .........
ಸತ್ಯ .
.ಆದರೆ ನಿನ್ನ ಆಪೋಶನಕ್ಕೆ
ಬಲಿಯಾದವರ ಆತ್ಮಗಳಿಗೆ
ಉತ್ತರ ಕೊಡುವವರಾರು ?
ಒಂದು ನೆನಪಿರಲಿ ನಿನಗೆ
ಇತಿಹಾಸದ ಪುಟವನ್ನ ತೆರೆದು ನೋಡು
ಹೇಳಿ ಹೆಸರಿಲ್ಲವಾದ
ಜಪಾನಿಯರು
ಮತ್ತ್ತೆ- ಮತ್ತೆ ಎದ್ದು ನಿ೦ತ ಪರಿ
ನೋಡುತ್ತಿರು ನೀನು .
ನಿನ್ನ ಕಾಲಗರ್ಭದೊಳಕ್ಕೆ ಹೂತಿಟ್ಟು
" ಅಗ್ನಿ ದಿವ್ಯದಂತೆ "
ಅವರು ಬೆಳೆದು ನಿಲ್ಲುವ ಪರಿ
.ಅದಕ್ಕೆ ಅವರನ್ನ
ಜಪಾನಿಯರು ಎಂದು ಕರೆಯುವುದು .