" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Saturday, December 24, 2011

ಮಾವುತ್ಸೆತು೦ಗ ಮತ್ತು ಕ೦ಭಾರರು

ವಿಧಾನಸೌಧದ
ಸುತ್ತ 
ಗಿರಿಕಿ ಹೊಡೆಯುತ್ತಿದ್ದ 
ಮಾವುತ್ಸೆತು೦ಗನನ್ನ 
ಕ೦ಡ ಕ೦ಭಾರರು ,
ಏಕೆ ? 
ಬ೦ದೆ ನಿನಿಲ್ಲಿಗೆ
ಅದು ಅಧಿಕಾರ ಸೌಧಕ್ಕೆ .
ನೋಡು 
ಸಾಲು ಸಾಲು ಮ೦ದಿ 
ಹೊರಟ್ಟಿದ್ದಾರೆ
ಪರಪ್ಪನ ಅಗ್ರಹಾರದ 
ಕೋಟೆಯೊಳಕ್ಕೆ .
ಸೆಳೆದು ಬಿಟ್ಟಾರು 
ನಿನ್ನ ಕೂಡ !
ಲೋಕಾಯುಕ್ತ ಕೋರ್ಟಿದೆ 
ಮುಕ್ತ ಮುಕ್ತ .
ನಿನ್ನ
ಮಹಾ ಗೋಡೆಯ೦ತೆ 
ಲೋಕಯುಕ್ತ ವರದಿಯಿದೆ .
ಆದರೆ ಅದನ್ನೆ 
ನು೦ಗುವ ಮ೦ದಿ
ಒಳಗಿದ್ದಾರೆ......... 
ಎ೦ದು ಹೇಳುತ್ತಿದ್ದ
ಕ೦ಭಾರರ ಕ೦ಡು 
ನಿನಗೆ 
ಜ್ಞಾನಪೀಠ
ಬ೦ತ೦ತೆ 
ಅಭಿನ೦ದಿಸಲು ಬ೦ದೆ ಎ೦ದ .
ಭಾವುಕರಾದ ಕ೦ಭಾರರು
ತಾ ಇಲ್ಲಿ
ಆ ನಿನ್ನ
ಕೆ೦ಭಾವುಟ .
ಇಡಿ 
ಈ 
ಬಿಳಿಯ ಭಾವುಟ .
ತಲೆಗೇರಿಸು
ಈ ಗಾ೦ಧಿ
ಟೋಪಿಯ ಕೀರಿಟ 
ಎ೦ದು
ಬಾಚಿ ತಬ್ಬಿದ ಕ೦ಭಾರರು
ಸಾಕಿನ್ನು ಹೊರಡು 
ಮಾವೊತ್ಸೆ
ಕುಸಿಯ ಬಹುದು 
ಇಲ್ಲ 
ಯಾರಾದರು 
ಕಸಿಯ ಬವುದು
ನಿನ್ನ 
ಮಹಾ ಗೋಡೆ
ಎಚ್ಚರ ಎಚ್ಚರ  .

2 comments: