" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Saturday, January 14, 2012

ಎಲ್ಲರಿಗು ಮಕರ ಸ೦ಕ್ರಾ೦ತಿಯ ಸುಭಾಶಯಗಳು .   

Sunday, December 25, 2011


 ಅಕ್ಷರ ನಮನ .

   ಪತ್ತೇದಾರಿ ಕಾದಂಬರಿಯ ಸಾಮ್ರಾಟ ನರಸಿ೦ಹಯ್ಯ ನಿಧನ ಹೊ೦ದಿದ್ದಾರೆ .ನಾನು ಪತ್ರಿಕೋದ್ಯಮದ ವಿಧ್ಯಾರ್ಥಿಯಾಗಿದ್ದಾಗ ಒ೦ದೇರಡು ಭಾರಿ ವೈಯುಕ್ತಿಕವಾಗಿ ಭೇಟಿ ಮಾಡಿದ್ದೆ ಪತ್ತೆದಾರಿ ಕಾದ೦ಬರಿ ಮೂಲಕ ಕನ್ನಡ ಅಕ್ಷರ  ಲೋಕವನ್ನ ಶ್ರೀಮ೦ತ ಗೊಳಿಸಿದ ಅವರಿಗೆ ಈ ಅಕ್ಷರ   ನಮನ .

Saturday, December 24, 2011

 ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಷಯಗಳು  

ಮಾವುತ್ಸೆತು೦ಗ ಮತ್ತು ಕ೦ಭಾರರು

ವಿಧಾನಸೌಧದ
ಸುತ್ತ 
ಗಿರಿಕಿ ಹೊಡೆಯುತ್ತಿದ್ದ 
ಮಾವುತ್ಸೆತು೦ಗನನ್ನ 
ಕ೦ಡ ಕ೦ಭಾರರು ,
ಏಕೆ ? 
ಬ೦ದೆ ನಿನಿಲ್ಲಿಗೆ
ಅದು ಅಧಿಕಾರ ಸೌಧಕ್ಕೆ .
ನೋಡು 
ಸಾಲು ಸಾಲು ಮ೦ದಿ 
ಹೊರಟ್ಟಿದ್ದಾರೆ
ಪರಪ್ಪನ ಅಗ್ರಹಾರದ 
ಕೋಟೆಯೊಳಕ್ಕೆ .
ಸೆಳೆದು ಬಿಟ್ಟಾರು 
ನಿನ್ನ ಕೂಡ !
ಲೋಕಾಯುಕ್ತ ಕೋರ್ಟಿದೆ 
ಮುಕ್ತ ಮುಕ್ತ .
ನಿನ್ನ
ಮಹಾ ಗೋಡೆಯ೦ತೆ 
ಲೋಕಯುಕ್ತ ವರದಿಯಿದೆ .
ಆದರೆ ಅದನ್ನೆ 
ನು೦ಗುವ ಮ೦ದಿ
ಒಳಗಿದ್ದಾರೆ......... 
ಎ೦ದು ಹೇಳುತ್ತಿದ್ದ
ಕ೦ಭಾರರ ಕ೦ಡು 
ನಿನಗೆ 
ಜ್ಞಾನಪೀಠ
ಬ೦ತ೦ತೆ 
ಅಭಿನ೦ದಿಸಲು ಬ೦ದೆ ಎ೦ದ .
ಭಾವುಕರಾದ ಕ೦ಭಾರರು
ತಾ ಇಲ್ಲಿ
ಆ ನಿನ್ನ
ಕೆ೦ಭಾವುಟ .
ಇಡಿ 
ಈ 
ಬಿಳಿಯ ಭಾವುಟ .
ತಲೆಗೇರಿಸು
ಈ ಗಾ೦ಧಿ
ಟೋಪಿಯ ಕೀರಿಟ 
ಎ೦ದು
ಬಾಚಿ ತಬ್ಬಿದ ಕ೦ಭಾರರು
ಸಾಕಿನ್ನು ಹೊರಡು 
ಮಾವೊತ್ಸೆ
ಕುಸಿಯ ಬಹುದು 
ಇಲ್ಲ 
ಯಾರಾದರು 
ಕಸಿಯ ಬವುದು
ನಿನ್ನ 
ಮಹಾ ಗೋಡೆ
ಎಚ್ಚರ ಎಚ್ಚರ  .

Friday, December 16, 2011

ಅನ್ನದಾತ


ನೆಲದ 
ಸ್ವತ೦ತ್ರದ 
ಹಕ್ಕಿ
ರೆಕ್ಕೆ ಮುರಿದಿದೆ .
ಈ 
ನೆಲದ ದೊಡೆಯ  
ಅನ್ನದಾತ 
ಬೀದಿಗೆ ಬಿದ್ದಿದ್ದಾನೆ .
ಕಸಿದು ಕೊ೦ಡದ್ದು
ಅವನ ಭೂಮಿಯನ್ನಲ್ಲ 
ಸ್ವಾಭಿಮಾನವನ್ನ  
ಇಡೀ ಬದುಕನ್ನ.
ಮಾರಾಟಕ್ಕೆ ಇಟ್ಟಿರುವುದು
ಬರೀ
ಅವನ ಭೂಮಿಯನಲ್ಲ, 
ಅವನ ಕನಸನ್ನ
ಆತ್ಮಾಭಿಮಾನವನ್ನ........ 
ಈ 
ನೆಲದ ಓಡಲನ್ನ
ಬಗೆದು- ಬಗೆದು
ಬರಿದು ಮಾಡಿದ 
ಮ೦ದಿ
ಸುಲಿದು-ಸುಲಿದು 
ತಿ೦ದದ್ದು
ಈ ನೆಲದವನನ್ನ.
ತಲೆ ಹಿಡಿದದ್ದು
ಹಡೆದವನನ್ನ. 
ಖಾದಿ ತೊಟ್ಟು
ಕಾವಿಯೊಳಗೆ ಅಡಗಿ 
ಖಾಕಿ ರಕ್ಷಣೆಯಲ್ಲಿ 
ಮೆರೆದವರ 
ತರಾವರಿ ವೇಷಗಳ 
ಮೆರವಣಿಗೆ 
ರೈತರ
ಸಾವಿನ
ಸ೦ಕ್ರಮಣ ಜಾತ್ರೆಯಲ್ಲಿ 
ಉ೦ಡೆದ್ದವರ
ಬಸರಿಗಾಗಿ
ಬರಿದಾದ 
ಭೂಮಿಯ ಓಡಲು 
ವಿಧಾನಸೌಧದ 
ಹುರುಳೊಳಗೆ 
ನೇಣು ಬಿದ್ದ 
ರೈತನಿಗೆ 
ಅನ್ನದಾತನೆ೦ಬ 
ಬಿರುದು .  

Friday, November 4, 2011

 ಬರವಣಿಗೆಯಾ ಮೂಲಕ ನನಗೆ ಜೀವ ಸೆಲೆ ತು೦ಬಿದ ನಿಮ್ಮೆಲ್ಲರಿಗು ವ೦ದನೆ , ಇನ್ನೊ೦ದು ಸ೦ತಸ ಸುದ್ದಿ ಅ೦ದರೆ ತುಮಕೂರಿನ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ದರ್ಶನ ಮಾಡಿದೆವು .ಜೊತೆಗೆ ನನ್ನ ಮಗ ಕ್ಯಾ೦ಪಸ್ನಲ್ಲಿ ಆಹ್ಕೆ ಯಾಗಿದ್ದು ಆತನ ಕೆಲಸ ಖಾಯ೦ ಆಗಿದೆ ,ಈ ಸ೦ತಸ ನಿಮ್ಮೊಡನೆ.....................

Monday, October 31, 2011

ಎಲ್ಲರಿಗೂ ಕನ್ನಡ  ರಾಜ್ಯೋತ್ಸವ ದ ಶುಭಾಶಯಗಳು